...ಸದನದಲ್ಲಿನ ಪ್ರಧಾನಿ ಮೋದಿಜಿ ಮಾಡಿದ ಭಾಷಣದ ಕೆಲ ಅಂಶಗಳು. (3-3-16)
★ ನನಗೆ 20 ತಿಂಗಳಲ್ಲಿ 4 ಲಕ್ಷ ಶೌಚಾಲಯ ನಿರ್ಮಿಸಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಸರಕಾರಕ್ಕೆ ಧನ್ಯವಾದಗಳು.
★ 18 ಸಾವಿರ ಹಳ್ಳಿಗಳಿಗೆ ಕರೆಂಟ್ ಇದುವರೆಗೂ ಮುಟ್ಟಿಲ್ಲ, ಆದರೆ ಈಗ ನಾವು ತಲುಪಿಸಲು ಯೋಜನೆ ರೂಪಿಸಿಕೊಂಡು ಪ್ರತಿದಿನ. ಈ ಬಗ್ಗೆ ಪ್ರಗತಿ ಹೊಂದುತ್ತಿದ್ದೇವೆ ಇದಕ್ಕಾಗಿ ಕಾಂಗ್ರೆಸ್ ಗೆ ಧನ್ಯವಾದಗಳು .
★ UPA -1 ರಲ್ಲಿ ನಿರ್ಮಿಸಿದ ರೈಲ್ವೆ ಹಳಿಗಳ ಉದ್ದ 1,477 KM, UPA-2 ರಲ್ಲಿ 1520KM ಆದರೆ NDA ಕೇವಲ ಎರಡು ವರ್ಷದ ಅಂತರದಲ್ಲಿ ನಿರ್ಮಿಸಿದ ರೈಲ್ವೇ ಹಳಿಗಳ ಉದ್ದ 2292KM .
ಇಲ್ಲಿ ಅದೇ ಇಲಾಖೆ, ಅದೇ ಜನಗಳು ಆದರೆ ಕಾರ್ಯ ಶೈಲಿ ಬದಲಾಗಿದೆ ಅದು ಹೇಗಾಯಿತು ನೀವು ಯೋಚಿಸಿ.
★ ಕೇಂದ್ರದಿಂದ ರಾಜ್ಯಕ್ಕೆ
2014ರ ಸಾಲಿನಲ್ಲಿ ನೀಡಲಾದ ಅನುದಾನ 6,78,892 ಕೋಟಿ.
2015ರ ಸಾಲಿನಲ್ಲಿ ನೀಡಲಾದ ಅನುದಾನ
8,20,133 ಕೋಟಿ
ಅಂದರೆ ರಾಜ್ಯಕ್ಕೆ ಕೇಂದ್ರದಿಂದ 1,41,314 ಅಂದರೆ 20% ಅನುದಾನ ಹೆಚ್ಚುವರಿಯಾಗಿ ಬಂದಿದೆ.
★ ಅನೇಕ ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿದ್ದ ಬಾಂಗ್ಲಾ ಗಡಿಯ ಅನೇಕ ಹಳ್ಳಿಗಳು ಕತ್ತಲೆಯಲ್ಲಿದ್ದವು ಅವುಗಳಿಗೆ ಮುಕ್ತಿ ದೊರಕಿಸಿ ಅಭಿವೃದ್ಧಿ ಮಾಡಲು ಪ್ರಾರಂಭಿಸಿದ್ದು ಇದೇ ಮೋದಿ ಸರಕಾರ.
★ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಸಫಲತೆಗೆ ,ಕಾಂಗ್ರೆಸ್ ಬಡವರನ್ನು ಬಡವರಾಗಿಯೇ ಇಟ್ಟು ಆ ಯೋಜನೆ ತಲುಪಿಸಿರಲಿಲ್ಲ ,ಈಗ ನಾವು ತಲುಪಿಸುತ್ತಿದ್ದೇವೆ.ಇದೇ ಕಾರಣ.
★ಆಹಾರ ಭದ್ರತೆ ಯೋಜನೆ ನಿಮ್ಮ ಕೊಡುಗೆ ಅಂತೀರಿ ಆದರೆ ಕಾಂಗ್ರೆಸ್ ಆಢಳಿತದ ಕೇರಳ,ಮಿಜೋರಾಂ, ಅರುಣಾಚಲ ಪ್ರದೇಶ, ಮಣಿಪುರ ಕ್ಕೆ ಯೋಜನೆ ಇನ್ನೂ ಯಾಕೆ ತಲುಪಿಲ್ಲ?
★ಎಲ್ಲವೂ ನಿಮ್ಮ (ಕಾಂಗ್ರೆಸ್)ಯೋಜನೆ ಅಂತೀರಿ?ಆದರೆ GST BILL, ಜಲ ಸಾಮರ್ಥ್ಯ ವಿನಿಯೋಗ ಯೋಜನೆಗಳನ್ನು ಏಕೆ ತಡೆ ಹಿಡಿದಿದ್ದೀರಿ? ನಾವು ರಾಜ್ಯಸಭೆಯಲ್ಲಿ ಕಡಿಮೆ ಸ್ಥಾನ ಹೊಂದಿರುವುದನ್ನು ನೀವು ಈ ರೀತಿ ಯೋಜನೆಗಳ ತಡೆಯುವಿಕೆಗೆ ಉಪಯೋಗಿಸುವ ಬದಲು ದೇಶದ ಪ್ರಗತಿ ದೃಷ್ಟಿಯಿಂದ ಯೋಜನೆ ಜಾರಿಗೊಳಿಸಲು ಸಹಕರಿಸಿ ಆಮೇಲೆ ಬೇಕಾದ್ರೆ ಅದರ ಕ್ರೆಡಿಟ್ ತಗೊಳಿ.
★ ಪ್ರಧಾನ್ ಮಂತ್ರಿ ಫಸಲ್ ಭೀಮ್ ಯೋಜನೆ ಜೊತೆಗೆ ಈಗಾಗಲೇ ಇರುವ ಅನೇಕ ವಿಮಾ ಯೋಜನೆಗಳಾದ ಸುರಕ್ಷಾ ಯೋಜನೆ, ಚಾತ್ರ ಯೋಜನೆ, ಮೋಟಾರು ವಿಮಾ ಯೋಜನೆ, ಕೃಷಿ ಪಂಪ್ ವಿಮಾ ಯೋಜನೆ, ಟ್ರ್ಯಾಕ್ಟರ್ ವಿಮಾ, ಜೀವನದ ಜ್ಯೋತಿ , ದುರ್ಘಟನಾ ವಿಮಾ ಯೋಜನೆಯಂಥ ಏಳು ಯೋಜನೆಗಳಲ್ಲಿ ತಾಳೆ ಮಾಡಿ ಯಾವುದಾದರೂ ಎರಡನ್ನು ಜೋಡಿಸಿ ಅತ್ಯಂತ ಕಡಿಮೆ ಪ್ರೀಮಿಯಂಗೆ ರೈತನಿಗೆ ದೊರಕುವಂತೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಆಧ್ದರಿಂದ ಏಪ್ರಿಲ್ 1ರಿಂದ ದೇಶದ ಎಲ್ಲ ರೈತರಿಗೆ ಈ ಯೋಜನೆ ದೊರಕುತ್ತದೆ.
★ ನೀವು(ಕಾಂಗ್ರೆಸ್) ಮಾಡಲಾಗದ್ದನ್ನು ನಾವು ಮಾಡಬಾರದು ಆದ್ದರಿಂದಲೇ ನಮ್ಮ ಕಾಲೆಳೆಯುತ್ತೀರಿ. ಇದು ನಮಗೆ ಗೊತ್ತಿದೆ
★ ರಾಹುಲನ ನೆನ್ನೆಯ ಕಾಮಿಡಿ ಭಾಷಣವನ್ನು ಅಣಕಿಸಿ, ಸದನದಲ್ಲಿ ವಿಪಕ್ಷ ಸ್ಥಾನದ ಗೌರವ ಉಳಿಸಿಕೊಳ್ಳಲು ಮನವಿಯಿತ್ತರು.
ಸರಿಯಾಗಿ ತಮ್ಮ ಮನೆಯನ್ನು ನೋಡಲಾಗದ ಕಾಂಜೀಪೀಂಜಿಗಳು ದೇಶದ ಪ್ರಧಾನಮಂತ್ರಿಯನ್ನು ಫೇಕು ಅನ್ನುವ ಮೂರ್ಖರೇ ತಿಳಿದುಕೊಳ್ಳಿ .ನಾವು ಮೋದಿ ಭಕ್ತರಲ್ಲ ,ದೇಶಭಕ್ತರು. ನಿಮ್ಮ ಭಕ್ತಿ ಏನೆಂಬುದು ಮೊನ್ನೆ ಸಿದ್ದರಾಮಯ್ಯರ ವಾಚ್ ಬಗ್ಗೆ ಸಮರ್ಥನೆ ನೀಡಿದಾಗಲೇ ಗೊತ್ತಾಗಿದೆ. ತಾಕತ್ತಿದ್ದರೆ ಮೋದಿ ಕೊಟ್ಟ ಅಂಕಿ ಅಂಶಗಳಂತೆ ಸಿದ್ದರಾಮಯ್ಯ ಕೊಟ್ಟು ತೋರಿಸಲಿ.
- ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ.
No comments:
Post a Comment