ಕೆಮ್ಮು ನಿವಾರಕ ತೆಂಗು
Feb 3, 2016, 08.22 PM IST
0302-2-2-UP201546_43_PM
0302-2-2-UP201546_43_PM
ತೆಂಗಿನಕಾಯಿ ಸಂಪೂರ್ಣ ಆಹಾರ. ಮಾನವನ ದೇಹಕ್ಕೆ ಬೇಕಾದ ಎಲ್ಲಾ ಅತ್ಯವಶ್ಯ ಪೋಷಕಾಂಶಗಳು ತೆಂಗಿನಕಾಯಿಯಲ್ಲಿವೆ.
ತೆಂಗಿನಕಾಯಿಯ ಪೋಷಕಾಂಶ ಹಾಗೂ ಕೊಬ್ಬಿನಾಂಶವನ್ನು ಒಳಗೊಂಡಿರುತ್ತದೆ. ಅದರಲ್ಲಿ ಎಣ್ಣೆಯ ಅಂಶವು ಹೆಚ್ಚಾಗಿ ಇರುತ್ತದೆ. ತೆಂಗಿನಕಾಯಿಯಲ್ಲಿ ಜೀವಸತ್ವಗಳು,ಅಮೈನೋ ಆಮ್ಲಗಳು,ಪೊಟ್ಯಾಷಿಯಂ, ಸೋಡಿಯಂ, ಮೆಗ್ನೇಷಿಯಂ ಹಾಗೂ ರಂಜಕಗಳಿವೆ.ಪ್ರತಿ 100ಗ್ರಾಂ.ಒಣಕೊಬ್ಬರಿಯಲ್ಲಿ 662ಕ್ಯಾಲೋರಿಗಳಷ್ಟು ಶಕ್ತಿ ಅಡಕವಾಗಿದೆ.
ಮನುಷ್ಯನ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿಯೂ ತೆಂಗಿನಕಾಯಿ ಒಂದು ಉಪಯುಕ್ತ ಆಹಾರ. ಎಳನೀರು ಸುಲಭವಾಗಿ ಜೀರ್ಣವಾಗುತ್ತದೆ. ಎಳನೀರಿನಲ್ಲಿ ಹಲವಾರು ಕಿಣ್ವಗಳು,ಕೊಬ್ಬಿನಂಶ ಹಾಗೂ ಕಾರ್ಬೋಹೈಡ್ರೇಟುಗಳು ಹೇರಳವಾಗಿವೆ.ದೇಹಕ್ಕೆ ಪುಷ್ಟಿದಾಯಕವಾಗಿದ್ದು, 'ಏ'ಜೀವಸತ್ವವನ್ನು ಹೊಂದಿದ ಎಳನೀರು ಮಕ್ಕಳಲ್ಲಿ ಪೋಷಕಾಂಶದ ಕೊರತೆಯನ್ನು ನೀಗಿಸುವುದಲ್ಲದೆ ಎಲ್ಲಾ ರೀತಿಯ ಪ್ರಾಕತಿಕ ಖನಿಜಗಳನ್ನು ದೇಹಕ್ಕೆ ಒದಗಿಸಿ ಬೆಳವಣಿಗೆಗೆ ಸಹಾಯವನ್ನು ಮಾಡುತ್ತದೆ.ದೇಹಕ್ಕೆ ದಿನವೊಂದಕ್ಕೆ ಅಗತ್ಯ 'ಸಿ' ಹಾಗೂ 'ಬಿ' ಜೀವಸತ್ವಗಳು ಎಳೆನೀರಿನಲ್ಲಿರುತ್ತವೆ.
ಒಣಕೆಮ್ಮು ನಿವಾರಣೆಗೆ: ಹಸುವಿನ ಹಾಲಿನೊಂದಿಗೆ ಸ್ವಲ್ಪ ಪ್ರಮಾಣದ ತೆಂಗಿನಹಾಲು, ಒಂದು ಚಮಚ ಗಸಗಸೆ,ಶುದ್ಧ ಜೇನುತುಪ್ಪದೊಂದಿಗೆ ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಚಮಚದಷ್ಟು ಸೇವಿಸಿದರೆ ಒಣಕೆಮ್ಮು,ಗಂಟಲಿನ ಕಿರಿಕಿರಿ,ಧೂಮಪಾನ ಸೇವನೆಯಿಂದ ಉಂಟಾಗುವ ಗಂಟಲಿನ ನೋವು ಗುಣವಾಗುತ್ತದೆ.
ಜೀರ್ಣಕ್ರಿಯೆಗೆ: ಎಳೆ ತೆಂಗಿನಕಾಯಿ ತಿರುಳು ಜೀರ್ಣಾಂಗವ್ಯೆಹದ ಏರುಪೇರಿಗೆ ಒಳ್ಳೆಯ ಔಷಧ. ಅಜೀರ್ಣ, ವಾಯು ಪ್ರಕೋಪ,ಹೊಟ್ಟೆ ಹುಣ್ಣು, ಅತಿಬೇಧಿ ಮತ್ತು ಮೂಲವ್ಯಾಧಿ ರೋಗಗಳಿಗೆ ಇದು ಒಳ್ಳೆಯ ಔಷಧಿಯಾಗಿದೆ.ವಾಂತಿ ಹಾಗೂ ಅಜೀರ್ಣಕ್ಕೆ ಎಳನೀರು ರಾಮಬಾಣ.
ಆಮ್ಲೀಯ ತೊಂದರೆ ನಿವಾರಣೆಗೆ: ಚೆನ್ನಾಗಿ ಬಲಿತಿರುವ ತೆಂಗಿನಕಾಯಿ, ಆಮ್ಲೀಯ ತೊಂದರೆಗಳಿಗೆ ಪರಿಣಾಮಕಾರಿ ಔಷಧಿಯಾಗಿದೆ.ತೆಂಗಿನೆಣ್ಣೆಯು ಹೊಟ್ಟೆಯಲ್ಲಿ ಉತ್ಪಾದನೆಯಾಗುವ ಆಮ್ಲಗಳನ್ನು ಕಡಿಮೆ ಮಾಡಿ,ರೋಗಿಗೆ ಆರಾಮವನ್ನು ನೀಡುತ್ತದೆ.
ಕರುಳಿನ ಹುಳುಗಳ ನಿವಾರಣೆಗೆ: ತೆಂಗಿನಕಾಯಿಯು ಹೊಟ್ಟೆಯಲ್ಲಿರುವ ಹುಳುಗಳಿಗೆ ಪರಿಣಾಮಕಾರಿ ಔಷಧ. ಖಾಲಿ ಹೊಟ್ಟೆಯಲ್ಲಿ ಒಂದು ಚಮಚದಷ್ಟು ತೆಂಗಿನತುರಿಯನ್ನು ಸೇವಿಸಿ,3 ಗಂಟೆಗಳ ನಂತರ ಒಂದು ಚಮಚದಷ್ಟು ಹರಳೆಣ್ಣೆಯನ್ನು ಕುಡಿದರೆ ಹೊಟ್ಟೆಯಲ್ಲಿರುವ ಎಲ್ಲಾ ಹುಳುಗಳು ನಾಶವಾಗುತ್ತವೆ.ಈ ಕ್ರಮವನ್ನು ಹುಳುಗಳು ನಾಶವಾಗುವವರೆಗೆ ಪುನರಾವರ್ತಿಸಿದರೆ ಒಳ್ಳೆಯದು.
ಕಾಲರಾ: ಎಳನೀರು ಕಾಲರಾ ರೋಗಕ್ಕೆ ಬಹಳ ಪರಿಣಾಮಕಾರಿಯಾಗಿದೆ.8-12ಔನ್ಸ್ ನಷ್ಟು ಎಳನೀರಿಗೆ ಒಂದು ಚಮಚದಷ್ಟು ತಾಜಾ ನಿಂಬೆರಸವನ್ನು ಬೆರೆಸಿ,ರೋಗಿಗೆ ಕೊಟ್ಟರೆ ಆತನ ದೇಹದಲ್ಲಿರುವ ಎಲೆಕ್ಟ್ರೋಲೈಟ್ ಸಮತೋಲನವಾಗಿ ರಕ್ತದಲ್ಲಿನ ಅಸಿಡೋಸಿಸ್ ಕಡಿಮೆಯಾಗುತ್ತದೆ.
ಮೂತ್ರಜನಕಾಂಗದ ತೊಂದರೆ: ತೆಂಗಿನಕಾಯಿಯ ನೀರು ಮೂತ್ರಜನಕಾಂಗದ ತೊಂದರೆಗಳಿಗೆ ಪರಿಹಾರವನ್ನು ನೀಡುತ್ತದೆ.ಅದು ಮೂತ್ರಜನಕಾಂಗ ಹಾಗೂ ಪಿತ್ತಜನಕಾಂಗಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಿ ಹತ್ತಿಕ್ಕಲ್ಪಟ್ಟ ಮೂತ್ರ ವಿಸರ್ಜನಾ ವ್ಯವಸ್ಥೆಯನ್ನು ಸರಾಗವಾಗಿಸುವುದು.
ಚರ್ಮರೋಗಕ್ಕೆ: ಬಲಿತ ತೆಂಗಿನಕಾಯಿಯ ಹೋಳಿನಿಂದ ತೆಗೆಯಲ್ಪಟ್ಟ ಎಣ್ಣೆಯು, ಸುಟ್ಟಗಾಯಗಳಿಗೆ ಪರಿಣಾಮಕಾರಿ ಔಷಧಿಯಾಗಿದೆ.ಮುಲಾಮುಗಳ ತಯಾರಿಕೆಯಲ್ಲಿ ತೆಂಗಿನೆಣ್ಣೆಯು ಪ್ರಮುಖ ಪಾತ್ರವಹಿಸುತ್ತದೆ.
- ಮಂಜುಳಾ.ಬಿ.
http://m.vijaykarnataka.com/home/health/article/coconut-cough-relief/articleshow/50839352.cms
Feb 3, 2016, 08.22 PM IST
0302-2-2-UP201546_43_PM
0302-2-2-UP201546_43_PM
ತೆಂಗಿನಕಾಯಿ ಸಂಪೂರ್ಣ ಆಹಾರ. ಮಾನವನ ದೇಹಕ್ಕೆ ಬೇಕಾದ ಎಲ್ಲಾ ಅತ್ಯವಶ್ಯ ಪೋಷಕಾಂಶಗಳು ತೆಂಗಿನಕಾಯಿಯಲ್ಲಿವೆ.
ತೆಂಗಿನಕಾಯಿಯ ಪೋಷಕಾಂಶ ಹಾಗೂ ಕೊಬ್ಬಿನಾಂಶವನ್ನು ಒಳಗೊಂಡಿರುತ್ತದೆ. ಅದರಲ್ಲಿ ಎಣ್ಣೆಯ ಅಂಶವು ಹೆಚ್ಚಾಗಿ ಇರುತ್ತದೆ. ತೆಂಗಿನಕಾಯಿಯಲ್ಲಿ ಜೀವಸತ್ವಗಳು,ಅಮೈನೋ ಆಮ್ಲಗಳು,ಪೊಟ್ಯಾಷಿಯಂ, ಸೋಡಿಯಂ, ಮೆಗ್ನೇಷಿಯಂ ಹಾಗೂ ರಂಜಕಗಳಿವೆ.ಪ್ರತಿ 100ಗ್ರಾಂ.ಒಣಕೊಬ್ಬರಿಯಲ್ಲಿ 662ಕ್ಯಾಲೋರಿಗಳಷ್ಟು ಶಕ್ತಿ ಅಡಕವಾಗಿದೆ.
ಮನುಷ್ಯನ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿಯೂ ತೆಂಗಿನಕಾಯಿ ಒಂದು ಉಪಯುಕ್ತ ಆಹಾರ. ಎಳನೀರು ಸುಲಭವಾಗಿ ಜೀರ್ಣವಾಗುತ್ತದೆ. ಎಳನೀರಿನಲ್ಲಿ ಹಲವಾರು ಕಿಣ್ವಗಳು,ಕೊಬ್ಬಿನಂಶ ಹಾಗೂ ಕಾರ್ಬೋಹೈಡ್ರೇಟುಗಳು ಹೇರಳವಾಗಿವೆ.ದೇಹಕ್ಕೆ ಪುಷ್ಟಿದಾಯಕವಾಗಿದ್ದು, 'ಏ'ಜೀವಸತ್ವವನ್ನು ಹೊಂದಿದ ಎಳನೀರು ಮಕ್ಕಳಲ್ಲಿ ಪೋಷಕಾಂಶದ ಕೊರತೆಯನ್ನು ನೀಗಿಸುವುದಲ್ಲದೆ ಎಲ್ಲಾ ರೀತಿಯ ಪ್ರಾಕತಿಕ ಖನಿಜಗಳನ್ನು ದೇಹಕ್ಕೆ ಒದಗಿಸಿ ಬೆಳವಣಿಗೆಗೆ ಸಹಾಯವನ್ನು ಮಾಡುತ್ತದೆ.ದೇಹಕ್ಕೆ ದಿನವೊಂದಕ್ಕೆ ಅಗತ್ಯ 'ಸಿ' ಹಾಗೂ 'ಬಿ' ಜೀವಸತ್ವಗಳು ಎಳೆನೀರಿನಲ್ಲಿರುತ್ತವೆ.
ಒಣಕೆಮ್ಮು ನಿವಾರಣೆಗೆ: ಹಸುವಿನ ಹಾಲಿನೊಂದಿಗೆ ಸ್ವಲ್ಪ ಪ್ರಮಾಣದ ತೆಂಗಿನಹಾಲು, ಒಂದು ಚಮಚ ಗಸಗಸೆ,ಶುದ್ಧ ಜೇನುತುಪ್ಪದೊಂದಿಗೆ ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಚಮಚದಷ್ಟು ಸೇವಿಸಿದರೆ ಒಣಕೆಮ್ಮು,ಗಂಟಲಿನ ಕಿರಿಕಿರಿ,ಧೂಮಪಾನ ಸೇವನೆಯಿಂದ ಉಂಟಾಗುವ ಗಂಟಲಿನ ನೋವು ಗುಣವಾಗುತ್ತದೆ.
ಜೀರ್ಣಕ್ರಿಯೆಗೆ: ಎಳೆ ತೆಂಗಿನಕಾಯಿ ತಿರುಳು ಜೀರ್ಣಾಂಗವ್ಯೆಹದ ಏರುಪೇರಿಗೆ ಒಳ್ಳೆಯ ಔಷಧ. ಅಜೀರ್ಣ, ವಾಯು ಪ್ರಕೋಪ,ಹೊಟ್ಟೆ ಹುಣ್ಣು, ಅತಿಬೇಧಿ ಮತ್ತು ಮೂಲವ್ಯಾಧಿ ರೋಗಗಳಿಗೆ ಇದು ಒಳ್ಳೆಯ ಔಷಧಿಯಾಗಿದೆ.ವಾಂತಿ ಹಾಗೂ ಅಜೀರ್ಣಕ್ಕೆ ಎಳನೀರು ರಾಮಬಾಣ.
ಆಮ್ಲೀಯ ತೊಂದರೆ ನಿವಾರಣೆಗೆ: ಚೆನ್ನಾಗಿ ಬಲಿತಿರುವ ತೆಂಗಿನಕಾಯಿ, ಆಮ್ಲೀಯ ತೊಂದರೆಗಳಿಗೆ ಪರಿಣಾಮಕಾರಿ ಔಷಧಿಯಾಗಿದೆ.ತೆಂಗಿನೆಣ್ಣೆಯು ಹೊಟ್ಟೆಯಲ್ಲಿ ಉತ್ಪಾದನೆಯಾಗುವ ಆಮ್ಲಗಳನ್ನು ಕಡಿಮೆ ಮಾಡಿ,ರೋಗಿಗೆ ಆರಾಮವನ್ನು ನೀಡುತ್ತದೆ.
ಕರುಳಿನ ಹುಳುಗಳ ನಿವಾರಣೆಗೆ: ತೆಂಗಿನಕಾಯಿಯು ಹೊಟ್ಟೆಯಲ್ಲಿರುವ ಹುಳುಗಳಿಗೆ ಪರಿಣಾಮಕಾರಿ ಔಷಧ. ಖಾಲಿ ಹೊಟ್ಟೆಯಲ್ಲಿ ಒಂದು ಚಮಚದಷ್ಟು ತೆಂಗಿನತುರಿಯನ್ನು ಸೇವಿಸಿ,3 ಗಂಟೆಗಳ ನಂತರ ಒಂದು ಚಮಚದಷ್ಟು ಹರಳೆಣ್ಣೆಯನ್ನು ಕುಡಿದರೆ ಹೊಟ್ಟೆಯಲ್ಲಿರುವ ಎಲ್ಲಾ ಹುಳುಗಳು ನಾಶವಾಗುತ್ತವೆ.ಈ ಕ್ರಮವನ್ನು ಹುಳುಗಳು ನಾಶವಾಗುವವರೆಗೆ ಪುನರಾವರ್ತಿಸಿದರೆ ಒಳ್ಳೆಯದು.
ಕಾಲರಾ: ಎಳನೀರು ಕಾಲರಾ ರೋಗಕ್ಕೆ ಬಹಳ ಪರಿಣಾಮಕಾರಿಯಾಗಿದೆ.8-12ಔನ್ಸ್ ನಷ್ಟು ಎಳನೀರಿಗೆ ಒಂದು ಚಮಚದಷ್ಟು ತಾಜಾ ನಿಂಬೆರಸವನ್ನು ಬೆರೆಸಿ,ರೋಗಿಗೆ ಕೊಟ್ಟರೆ ಆತನ ದೇಹದಲ್ಲಿರುವ ಎಲೆಕ್ಟ್ರೋಲೈಟ್ ಸಮತೋಲನವಾಗಿ ರಕ್ತದಲ್ಲಿನ ಅಸಿಡೋಸಿಸ್ ಕಡಿಮೆಯಾಗುತ್ತದೆ.
ಮೂತ್ರಜನಕಾಂಗದ ತೊಂದರೆ: ತೆಂಗಿನಕಾಯಿಯ ನೀರು ಮೂತ್ರಜನಕಾಂಗದ ತೊಂದರೆಗಳಿಗೆ ಪರಿಹಾರವನ್ನು ನೀಡುತ್ತದೆ.ಅದು ಮೂತ್ರಜನಕಾಂಗ ಹಾಗೂ ಪಿತ್ತಜನಕಾಂಗಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಿ ಹತ್ತಿಕ್ಕಲ್ಪಟ್ಟ ಮೂತ್ರ ವಿಸರ್ಜನಾ ವ್ಯವಸ್ಥೆಯನ್ನು ಸರಾಗವಾಗಿಸುವುದು.
ಚರ್ಮರೋಗಕ್ಕೆ: ಬಲಿತ ತೆಂಗಿನಕಾಯಿಯ ಹೋಳಿನಿಂದ ತೆಗೆಯಲ್ಪಟ್ಟ ಎಣ್ಣೆಯು, ಸುಟ್ಟಗಾಯಗಳಿಗೆ ಪರಿಣಾಮಕಾರಿ ಔಷಧಿಯಾಗಿದೆ.ಮುಲಾಮುಗಳ ತಯಾರಿಕೆಯಲ್ಲಿ ತೆಂಗಿನೆಣ್ಣೆಯು ಪ್ರಮುಖ ಪಾತ್ರವಹಿಸುತ್ತದೆ.
- ಮಂಜುಳಾ.ಬಿ.
http://m.vijaykarnataka.com/home/health/article/coconut-cough-relief/articleshow/50839352.cms
posted from Bloggeroid
No comments:
Post a Comment