

ಸ್ನೇಹಿತರೇ, ನಾಳೆ "ರಥಸಪ್ತಮಿ " ಹಬ್ಬ

ಹುಟ್ಟುಹಬ್ಬ, ಹಾಗೂ ಆರಾಧನೆಯ ದಿವಸ , ಈ ದಿನದಲ್ಲಿ ನೆಡೆಸುವ ಎಲ್ಲಾ ಕೆಲಸ ಕಾರ್ಯಗಳು, ಕೋರಿಕೆಗಳು ಫಲಪ್ರದವಾಗುವದೆಂಬ ನಂಬಿಕೆ ಬಲವಾಗಿದೆ. ಸೂರ್ಯದೇವ ಇಂದು ಸಿಂಹ

ರಾಶಿಯಿಂದ ಮಕರ ರಾಶಿಗೆ ತನ್ನ ರಥವೇರಿ ಹೊರಡುತ್ತಾನೆ
ಜಗತ್ತಿನ ಸಕಲ ಜೀವರಾಶಿಗಳ ಬೆಳವಣಿಗೆ, ಚಟುವಟಿಕೆಗಳು ಸೂರ್ಯನಿಂದಲೇ ನೆಡೆಯುವುದು, ಇಂದು ವೈವಸ್ವತ

ಮನ್ವಂತರದ ಆರಂಭದ ದಿನ ಸೂರ್ಯನು ತನ್ನ ಸಪ್ತಾಶ್ವಗಳ ರಥವನ್ನೇರಿ ಉತ್ತರದಿಕ್ಕಿನ ಮಾರ್ಗವಾಗಿ ಹೊರಡುವನು
ಇಂದು ಬೆಳಗಿನ ಜಾವದಲ್ಲಿ ಸಾಧ್ಯವಾದಲ್ಲಿ ನದಿ, ಸಮುದ್ರ, ಸಂಗಮಗಳಲ್ಲಿ,(ಮಾಘ ಸ್ನಾನಕ್ಕೆ ಬಹಳ ಪ್ರಾಮುಖ್ಯತೆಯಿದೆ) ಅಥವಾ ಮನೆಯಲ್ಲೇ ಗಂಗೆಯನ್ನು ನೆನೆಸಿಕೊಂಡು ಸ್ನಾನಮಾಡಿ -- ಸ್ನಾನಮಾಡುವಾಗ ಎರಡುಭುಜದ ಮೇಲೆ ತಲೆಯಮೇಲೆ ಎಕ್ಕದ ಎಲೆಗಳನ್ನಿಟ್ಟುಕೊಂಡು ಸ್ನಾನ ಮಾಡಿದರೆ ಆಯುರಾರೋಗ್ಯ ಹೆಚ್ಚುವುದೆಂದು ತಿಳಿಸಿದ್ದಾರೆ --- ನಂತರ ಪೂಜೆಪುನಸ್ಜಾರ ಮುಗಿಸಿ ಪೂರ್ವಾಭಿಮುಖವಾಗಿ ನಿಂತು ಸೂರ್ಯನಮಸ್ಕಾರ ಮಾಡಬೇಕು, ಸೂರ್ಯನಾಮಾವಳಿ ಜಪಿಸುತ್ತಾ ೧೦೮ ನಮಸ್ಕಾರ ಮಾಡುತ್ತಾರೆ --- ಕೈಲಾಗದವರು ೧೨ ನಮಸ್ಕಾರಗಳನ್ನಾದರೂ ಮಾಡಬೇಕು --- ಸೂರ್ಯನಿಗೆ ಪ್ರಿಯವಾದ ರವೆ ಪಾಯಸ ಮಾಡಿ ನೈವೇದ್ಯ ಮಾಡಿ ಎಲ್ಲರೂ ಸ್ವೀಕರಿಸಬೇಕು, ಆದಿತ್ಯಹೃದಯವನ್ನು ಇಂದಾದರೂ ಪಾರಾಯಣ ಮಾಡಿದರೆ ಆಯುರಾರೋಗ್ಯ,ಐಶ್ವರ್ಯ, ವಿದ್ಯಾ ಬುದ್ದಿ ತೇಜಸ್ಸು ಹೆಚ್ಚುವುದರಲ್ಲಿ ಯಾವ ಸಂಶಯವೇ ಇಲ್ಲವೆಂದು ತಿಳಿದುಬಂದಿದೆ --
ಯೋಗಮಾಡುವವರಿಗೆ ಸೂರ್ಯನಮಸ್ಕಾರವೇ ಪ್ರಾಧಾನ್ಯ -- ರಥಸಪ್ತಮಿಯಂದು ಎಲ್ಲಾ ತರಗತಿಗಳಲ್ಲೂ , ದೊಡ್ಡ ದೊಡ್ಡ ಮೈದಾನಗಳಲ್ಲೂ , ಯೋಗ ತರಬೇತುದಾರರು ನೂರಾರು, ಸಾವಿರಾರು ಜನರಿಂದ ಸೂರ್ಯನಮಸ್ಕಾರದ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುತ್ತಾರೆ -- ಈಬಾರಿ ಭಾನುವಾರವೇ ಭಾನುವಿನ ಹುಟ್ಟುಹಬ್ಬ ಬಂದಿರುವುದು ವಿಶೇಷ ವಾಗಿದೆ -
ಸ್ನೇಹಿತರೇ ನಾವೂ ಈ ಶುಭದಿವಸದಂದು ನಮ್ಮ ಕೈಲಾದಷ್ಟು ಸೂರ್ಯನನಸ್ಕಾರ ಮಾಡಿ ಧ್ಯಾನ ಪೂಜೆ ನೈವೇದ್ಯಮಾಡಿ ಆ ಆದಿತ್ಯನ ಕೃಪೆಗೆ ಪಾತ್ರರಾಗಿ ಆಯುರಾರೋಗ್ಯ ಪಡೆದು ಸಂತಸವಾಗಿರೋಣ ನೀವೇನಂತೀರಿ ??????
posted from Bloggeroid
No comments:
Post a Comment